Slide
Slide
Slide
previous arrow
next arrow

ಶಿಕ್ಷಣದ ಜೊತೆ ಕ್ರೀಡೆ, ಕಲಾಸಕ್ತಿಯನ್ನು ಬೆಳೆಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ: ಶಾಸಕ ಭೀಮಣ್ಣ

300x250 AD

ಸಿದ್ದಾಪುರ : ನಾಡದೇವಿ ಜನಪರ ವೇದಿಕೆ ವತಿಯಿಂದ ಏರ್ಪಡಿಸಿದ ಭರತನಾಟ್ಯ ಬೇಸಿಗೆ ಶಿಬಿರದ ಸಮಾರೋಪ ಪ್ರತಿಭಾನ್ವಿತರಿಗೆ ಸನ್ಮಾನ ಕಾರ್ಯಕ್ರಮ ಸಿದ್ದಾಪುರದ ಗಂಗಾಂಬಿಕಾ ದೇವಾಲಯದ ಸಭಾಭವನದಲ್ಲಿ ಶನಿವಾರ ನಡೆಯಿತು.

ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಣದ ಜೊತೆಗೆ ಕ್ರೀಡೆ, ಕಲೆಗಳನ್ನು ಅಳವಡಿಸಿಕೊಂಡು ಶಿಸ್ತು ಹಾಗೂ ಸಂಸ್ಕಾರದೊಂದಿಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ, ಈ ರೀತಿಯ ಅವಕಾಶಗಳು ಹೆಚ್ಚು ಹೆಚ್ಚು ಸಿಕ್ಕಾಗ ಪ್ರತಿಭೆಗಳು ಅರಳಲು ಸಾಧ್ಯ ಎಂದ ಅವರು ಶಿಕ್ಷಣದಲ್ಲಿ ಅತೀ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ಸನ್ಮಾನಿಸಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ, ಕಾರ್ಯಕ್ರಮ ಆಯೋಜಿಸಿರುವ ಸಂಘಟನೆಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

300x250 AD

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ್ ಮಾತನಾಡಿ ಮಕ್ಕಳಿಗೆ ತಿಳುವಳಿಕೆ ಬರುವವರೆಗೂ ಮೊಬೈಲ್ ಕೊಡಬೇಡಿ, ಒಳ್ಳೆ ಸಂಸ್ಕಾರ ಶಿಕ್ಷಣ ನೀಡಿ ಅವರಿಗೆ ಬದುಕಲು ದಾರಿ ಕಲ್ಪಿಸಿಕೊಡಿ, ಕಲಿತ ಮಕ್ಕಳು ಉದ್ಯೋಗ ದಲ್ಲಿ ತೊಡಗಿಸಿಕೊಂಡು ತಂದೆ ತಾಯಂದಿರ ಅಸೆ ಈಡೇರಿಸಿ, ಸಂಘಟನೆ ಜವಾಬ್ದಾರಿ ಹೊತ್ತವರು ಉತ್ತಮ ಕೆಲಸ ಮಾಡಿ ನಾಡ ಸೇವೆ ಸಲ್ಲಿಸಿ ಉತ್ತಮ ಕೆಲಸ ಕಾರ್ಯಕ್ಕೆ ನಮ್ಮ ಸಹಕಾರ ಯಾವತ್ತು ಇದೆ ಎಂದರು.
ಸ್ತ್ರೀ ಶಕ್ತಿ ಸಂಘದ ಜಿಲ್ಲಾ ಅಧ್ಯಕ್ಷೆ ಶೋಭಾ ನಾಯ್ಕ ಶಿರಸಿ ಮಾತನಾಡಿ ಮಕ್ಕಳು ತಮ್ಮ ಸಮಯ ಹಾಳು ಮಾಡದೇ ಸಂಸ್ಕಾರ ಶಿಸ್ತು ಅಳವಡಿಸಿ ಕೊಳ್ಳಲು ಭರತನಾಟ್ಯ ಶಿಬಿರಕ್ಕೆ ಕಳುಹಿಸಿ ಉತ್ಸಾಹ ತೋರಿಸಿರುವುದು ಖುಷಿಯ ವಿಚಾರ, ಜಾತಿ ಧರ್ಮ ಬೇದವಿಲ್ಲದೆ ಎಲ್ಲರೊಡನೆ ಬೇರೆಯಲು ಮಕ್ಕಳನ್ನು ಇಂತಹ ಶಿಬಿರಗಳಿಗೆ ಸೇರಿಸಿ, ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು.
ಅನುಬಂಧ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಪಾಟೀಲ್ ಶಿರಸಿ ಮಾತನಾಡಿ ಭರತನಾಟ್ಯದಲ್ಲಿ ನೃತ್ಯ, ಸಂಗೀತ, ಶ್ಲೋಕಗಳನ್ನ ಕಲಿಯಬಹುದು, ಉತ್ತಮ ಶಿಸ್ತನ್ನು ಕಲಿಯಬಹುದು , ತರಬೇತಿ ಪಡೆದ ನೀವುಗಳು ಮುಂದಿನ ದಿನದಲ್ಲಿ ಪ್ರದರ್ಶನ ನೀಡಿ ಉತ್ತಮ ಹೆಸರು ಗಳಿಸಿ ಎಂದು ಶುಭ ಕೋರಿದರು.
ವೇದಿಕೆ ಅಧ್ಯಕ್ಷ ಅನಿಲ್ ಕೊಠಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಟ್ಟಣ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ನಾಯ್ಕ್, ಪ ಪಂ ಸದಸ್ಯ ಸುಧೀರ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ಕಳೆದ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ದೀಕ್ಷಾ ಗೌಡ , ಭೂಮಿಕಾ ಒಕ್ಕಲಿಗ ಇವರುಗಳಿಗೆ ಮತ್ತು ಭರತನಾಟ್ಯ ತರಬೇತಿ ಶಿಕ್ಷಕಿ ಆರ್ ಸವಿತಾರವರನ್ನ ಸನ್ಮಾನಿಸಿ ಗೌರವಿಸಲಾಯಿತು .
ತನುಜಾ ರಂಗಸ್ವಾಮಿ ಗೌಡ ಇವರಿಗೆ ಕನ್ನಡ ಧ್ವಜ ನೀಡಿ ವೇದಿಕೆಯ ಜಿಲ್ಲಾ ಮಹಿಳಾ ಅಧ್ಯಕ್ಷೆಯಾಗಿ ಘೋಷಣೆ ಮಾಡಲಾಯಿತು.
ಸಭಾ ಕಾರ್ಯಕ್ರಮ ನಂತರ ತರಬೇತಿ ಪಡೆದ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು. ಪತ್ರಕರ್ತ ದಿವಾಕರ ಸಂಪಖಂಡ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಕು. ತೃಪ್ತಿ ನಾಯ್ಕ್ ನಿರೂಪಿಸಿ ವಂದಿಸಿದರು.

Share This
300x250 AD
300x250 AD
300x250 AD
Back to top